ಶನಿವಾರ, ಸೆಪ್ಟೆಂಬರ್ 4, 2010

ಚುನಾವಣೆ-ಶ್ರಿಸಾಮಾನ್ಯ-1

ಚುನಾವಣೆಯ ಮುಂಚೆ......
ಹದಿನೈದು ದಿವಸ ನಿದ್ದೆಗೆಟ್ಟು
ಕಷ್ಟಪಟ್ಟು ಬಡಜನರಿಗೆ ಸ್ಪಂದಿಸಿ
ಹಣ-ಹೆಂಡ ಹರಿಸಿ ತೇಲಿಸುತ್ತಾರೆ ರಾಜಕಾರಣಿಗಳು\

ಚುನಾವಣೆಯ ನಂತರ......
ಐದು ವರ್ಷ ಬಡಜನರ ಮರೆತು
ಸಂಬಂಧಿಗಳ,ಹಿಂಬಾಲಕರ ಹಣ,ಸೈಟುಗಳಿಗೆ ಸ್ಪಂದಿಸಿ
ಕಷ್ಟವ ಮರೆತು ತೇಲಾಡುತ್ತಾರೆ ರಾಜಕಾರಣಿಗಳು\

ಶನಿವಾರ, ಜೂನ್ 19, 2010

ಚುನಾವಣೆ -ಶ್ರೀಸಾಮಾನ್ಯನ ಫಜೀತಿ

ಚುನಾವಣೆಗೆ ಮುಂಚೆ...
ಸಹಸ್ರಾರು ಹಿಂಬಾಲಕರ ಮುಂದೆ
ಬೀದಿಯ ಕಸವ ಗುಡಿಸಿ
ಶ್ರೀಸಾಮಸ್ಯರನ್ನು ಮಂತ್ರಮುಗ್ದರನ್ನಾಗಿಸುತ್ತಾರೆ ರಾಜಕಾರಣಿಗಳು \

ಚುನಾವಣೆಯ ನಂತರ ...
ಕೆಲವೇ ಹಿಂಬಾಲಕರ ಜೊತೆಗೂಡಿ
ಸರ್ಕಾರದ ಕಜಾನೆಯ ಗುಡಿಸಿ
ಶ್ರೀಸಾಮಸ್ಯರನ್ನು ಪೇಚಿಗೆ ಸಿಲುಕಿಸುತ್ತಾರೆ ರಾಜಕಾರಣಿಗಳು\